ಅಮಾವಾಸ್ಯೆಯ ದಿವಸ

ಹುಣ್ಣಿಮೆಯಿಂದ ಪಾಡ್ಯ
ಪಾಡ್ಯದಿಂದ ಬಿದಿಗೆ
ಅಂಶ-ಅಂಶ ಕರಗಿ
ಅಮಾವಾಸ್ಯೆ
ಇನ್ನಿಲ್ಲವಾಗಿಬಿಟ್ಟ ಚಂದ್ರ
ಬರುವುದಿಲ್ಲ ಇನ್ನು

ಇದೇ ಹದಿನೈದು ದಿನಗಳ ಹಿಂದೆ
ಈ ಆಕಾಶ
ತಾರೆಗಳ ಹೂಹಾರ ತೊಡಿಸಿ
ಚಂದ್ರನ್ನ ಸನ್ಮಾನಿಸಿತ್ತು,
ಪೂರ್ಣಚಂದ್ರನ ತುಂಬು ನಗೆ ತುಂಬಿ ಆಕಾಶ
ಸುರಿದಿತ್ತು, ಭೂಮಿಯ ತುಂಬ
ತುಂಬಿಕೊಂಡಿದ್ದೆವು ನಾವೂ ನೀವೂ

ಇನ್ನು ಇನ್ನಿಲ್ಲ ಚಂದ್ರ
ಆಕಾಶದಲ್ಲಿ ಹೊಳೆಯೋದಿಲ್ಲ
ತಾರೆಗಳ ಮೂಕ ಮೆರವಣಿಗೆಯಲ್ಲಿ
ಚಂದ್ರನ್ನ ಬೇರೆಲ್ಲೋ ಸಾಗಿಸಲಾಯ್ತು,
ಆಕಾಶ ಅಪೂರ್ಣ ಇನ್ನು
ಸೂರ್ಯನೂ ಒಬ್ಬಂಟಿ ಇನ್ನು

ಚಂದ್ರ ಹೋಗಿ ಬಿಟ್ಟ
ಇನ್ನೂ ಬೇಕು
ಎನ್ನುತ್ತಿದ್ದಾಗಲೇ ಹೋಗುವುದು ಒಳ್ಳೆಯದು
ಹೋಗಿಬಿಟ್ಟ

ಆದರೆ ಒಂದೇ ಶಂಕೆ
ಚಂದ್ರನಿಗೆ
ಆಕಾಶವಲ್ಲದೆ ಬೇರ ಎಲ್ಲಿದೆ ಜಾಗ ?
ಇದ್ದರೂ ಆ ಜಾಗ
ಚಂದ್ರನ ಅನಂತ ನಗೆಗೆ
ಖಂಡಿತಾ ಸಾಕಾಗ

ಬರುತ್ತಾನೆ
ಬರದೆ ಎಲ್ಲಿ ಹೋಗುತ್ತಾನೆ ?
ಚಂದ್ರ ಇದ್ದಲ್ಲೇ ತಾರೆಗಳು
ಇದ್ದಲ್ಲೆ ಆಕಾಶ
ಇದ್ದಲ್ಲೆ ನಮ್ಮ
ಕವಿತೆಗಳಿಗಿಷ್ಟು ಅವಕಾಶ

ನಗಲಿದ್ದಾನೆ ಹೊಸ ಶಕ್ತಿಯಿಂದ
ಹೊಗಲಿದ್ದಾನೆ ಹೊಸ ಭಾವನೆಗಳಿಂದ
ಹೊಳೆಯುತ್ತಾನೆ ಪುನಹಾ
ಬೆಳೆಯುತ್ತಾನೆ

ಅಳಬೇಡಿರೋ ಮಕ್ಕಳೆ
ನಿಸ್ತೇಜ ಪ್ರೇಮಿಗಳೆ
ಭಗ್ನ ಹೃದಯಿಗಳಾಗಿ
ಕೆರೆ ಹಾರಿ ಸಾಯಬೇಡಿರೋ ಕವಿಗಳೆ

ನಿಮಗಾಗಿ-ನಿಜವಾಗಿಯೂ
ನಿಮಗಾಗಿಯು

ಬರಲಿದ್ದಾನೆ ಚಂದ್ರ
ಚಂದ್ರ ಬರಲಿದ್ದಾನೆ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ಹನುನುಂತದೇವರ ದಂಡಕ
Next post ಬೇಕು – ಬೇಡ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys